ಒಲವು ಬಂಧನವಲ್ಲ

ಹಿಂದೆಲ್ಲ ಬಣ್ಣಬಣ್ಣದ ನಾಜೂಕು ಬಳೆಗಳ
ಕಂಡಾಗಲೆಲ್ಲಾ ಮನ ನವಿಲಾಗುತ್ತಿತ್ತು.
ಕಿಣಿಕಿಣಿ ನಾದ ಕಿವಿ ತುಂಬುತ್ತಿತ್ತು. ಆದರೆ
ಬಂಗಾರದ ಮಿನುಗು ಬಳೆಗಳು
ಹಸಿರು ಗಾಜಿನ ಬಳೆಗಳು
ದಿನಕಳೆದು ಗಡುಸಾದಂತೆ ಕೈಗಳು
ಗಾಯಗೊಳಿಸುತ್ತವೆ ತೊಡುವಾಗಲೆಲ್ಲಾ..
ಸಂಕೋಲೆಯ ಕಂಕಣ
ಡಂಭ ಜೀವನದ ಸುರುಳಿ
ಬಳೆ ತೊಡುವುದೆಂದರೆ ನನ್ನ
ಕೈಗಳಿಗೆ ಬೇಡಿ.

ಅಂಟಿಕೊಂಡ ಮೂಗುತಿ
ಮೂಗುತಿಯೇ ಇಲ್ಲದ
ನಿರಾಭರಣ ಮುಖಗಳ
ಕಂಡಾಗಲೆಲ್ಲಾ ನನ್ನ ಅಣಕಿಸುತ್ತದೆ.
ಆಗಾಗ ಎಲ್ಲೆಲ್ಲೋ ತೊಡರಿಕೊಂಡು
ಮೂಗು ಘಾಸಿಗೊಳ್ಳುವಾಗಲೆಲ್ಲಾ,
ಅಂದುಕೊಳ್ಳುತ್ತೇನೆ.. ಇದರ ಹಂಗೇ ಬೇಡ.
ತೆಗೆದು ಪಕ್ಕಕ್ಕಿಡಲೇ… ಎಂದು.

ಅರಿಸಿನದ ನಂಜು ತೆಗೆಯುವ ಕೊಂಬು
ಕೆಲವೊಮ್ಮೆ ಕುತ್ತಿಗೆಗೆ ಕೆರೆತ ತಂದಿಡುತ್ತದೆ.
ತಾಳಿಯ ನೀರು ಮೈಮೇಲೆ ಬಿದ್ದರೂ
ಕಡಿತ ಕಾಡುತ್ತದೆ.
ಮುಲಾಮುಗಳ ಸಾಲು ಹೆಚ್ಚು
ಹೆಚ್ಚುತ್ತಾ ಹೋದರೂ
ತುರಿಕೆ ನಿಲ್ಲುವುದಿಲ್ಲ.

ಮುಂಚಿನಂತೆ ಈಗ ನನ್ನ ಕಾಲಿಗೆ
ಗೆಜ್ಜೆ ಶೋಭಿಸುವುದಿಲ್ಲ.
ಗೆಜ್ಜೆಯ ಸುತ್ತ ಕಟ್ಟಿಕೊಂಡ ಆ ಸದ್ದು
ತಾರಕ್ಕೇರಿದಂತೆ ಸಂತೆಯೇ ಭುಗಿಲೇಳುತ್ತದೆ.

ತನು ಬಂಧನದ ಕಡಿವಾಣಗಳು
ಕಟ್ಟಿಹಾಕುವುದ ಅರಿತಿಲ್ಲ-
ಮನಗುದುರೆಗೆ ನಾಗಾಲೋಟ
ಕಲಿಸಬೇಕಿಲ್ಲ.
ಎಂದರೆ ಅವನೆಂದ ಒಳಹೊರಗು ಅರಿತರೆ
ತಾಳಿ, ನತ್ತು, ಬಳೆ ನಿನಗೆ ಬೇಕೆಂದಿಲ್ಲ
ಹೊರಗು ಮಾಡಬೇಕಿಲ್ಲ,
ಒಳಜಡಿದು ಬೀಗ ಹಾಕಬೇಕಿಲ್ಲ.
ಮತ್ತೆಲ್ಲವೂ ನಿನ್ನಿಷ್ಟ,
ನಿನ್ನೊಳಗೆ ನಾ
ನಿರುವುದೇ ನನ್ನ ಅದೃಷ್ಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವುದಿಲ್ಲ ಯಾವುದುಂಟು
Next post ಮಾವೊ : ನೂರು ವರ್ಷದ ನೆನಪು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys